Asianet Suvarna News Asianet Suvarna News

ಸೀತಾಳ ಗಂಡನ ಹುಡುಕಲು ಹೋಗಿ ತಾನೇ ತೋಡಿದ ಹಳ್ಳಕ್ಕೆ ಬಿದ್ದಳಾ ಭಾರ್ಗವಿ? ಏನಿದು ಟ್ವಿಸ್ಟ್‌?

ಸೀತಾಳ ಗಂಡನ ಹುಡುಕಲು ಹೋಗಿ ತಾನೇ ತೋಡಿದ ಹಳ್ಳಕ್ಕೆ ಬಿದ್ದಳಾ ಭಾರ್ಗವಿ? ಸೀತಾರಾಮದಲ್ಲಿ ಏನಿದು ಟ್ವಿಸ್ಟ್‌? 
 

Did Bhargavi fall into the pit dug by herself while searching for seetas husband in Seeta Rama suc
Author
First Published May 3, 2024, 12:33 PM IST

ಸೀತಾಳ ಗಂಡ ಯಾರು ಎಂದು ಹುಡುಕಲು ರುದ್ರಪ್ರತಾಪ್‌ಗೆ ಭಾರ್ಗವಿ ಹೇಳಿದ್ದಳು. ಇದೀಗ ಈ ವಿಷಯ ಅತ್ತ ಅಶೋಕ್‌ಗೆ ಗೊತ್ತಾಗಿದೆ. ಇತ್ತ ಭಾರ್ಗವಿ ಫೋನ್‌ನಲ್ಲಿ ಮಾತನಾಡುವ ಸಂದರ್ಭದಲ್ಲಿ ರಾಮ್‌ ಕೂಡ ಕೇಳಿಸಿಕೊಂಡಿದ್ದಾನೆ. ಸೀತಾಳ ಗಂಡನನ್ನು ಹುಡುಕುವ ಭರದಲ್ಲಿ ಭಾರ್ಗವಿ ತಾನೇ ತೋಡಿದ ಹಳ್ಳಕ್ಕೆ ಬಿದ್ದಳಾ ಎನ್ನುವುದು ಈಗಿರುವ ಪ್ರಶ್ನೆ. ಅಷ್ಟಕ್ಕೂ ಭಾರ್ಗವಿಯ ಕುತಂತ್ರದ ಕುರಿತು ಅಶೋಕ್‌ಗೆ ಇದಾಗಲೇ ಸಂದೇಹವಿದೆ. ಆದರೆ ರಾಮ್‌ ಮಾತ್ರ ತನ್ನ ಚಿಕ್ಕಮ್ಮನನ್ನು ದೇವರು ಎಂದೇ ಅಂದುಕೊಂಡಿದ್ದಾನೆ. ಅಶೋಕ್‌ ಸೂಕ್ಷ್ಮವಾಗಿ ಈ ಬಗ್ಗೆ ರಾಮ್‌ಗೆ ಹೇಳಿದರೂ ರಾಮ್‌ ತನ್ನ ಚಿಕ್ಕಮ್ಮ ಒಳ್ಳೆಯವಳು ಎಂದೇ ಹೇಳುತ್ತಾ ಬಂದಿದ್ದಾನೆ. ಆತನಿಗೆ ಹೇಗೆ ಈ ವಿಷಯ ಹೇಳಬೇಕು ಎನ್ನುವುದು ಅಶೋಕ್‌ಗೆ ಗೊತ್ತಾಗುತ್ತಿಲ್ಲ.

ಅದೇ ಇನ್ನೊಂದೆಡೆ ಇದೀಗ ಅಶೋಕ್‌ಗೆ ಭಾರ್ಗವಿಯ ಕುತಂತ್ರ ತಿಳಿದಿದೆ. ಇನ್ನೊಂದೆಡೆ ಭಾರ್ಗವಿ ಈ ಬಗ್ಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ರಾಮ್ ಕೂಡ ಕೇಳಿಸಿಕೊಂಡಿರುವ ರೀತಿಯಲ್ಲಿ ಪ್ರೊಮೋ ಬಿಡುಗಡೆಯಾಗಿದೆ. ಆದರೆ ಖಂಡಿತ ಆತ ಕೇಳಿಸಿಕೊಂಡಿರಲು ಸಾಧ್ಯವಿಲ್ಲ ಎನ್ನುವುದು ಸೀತಾರಾಮ ಫ್ಯಾನ್ಸ್‌ ಅಭಿಮತ. ಆದರೂ ಇದೀಗ ಅಶೋಕ್‌ ಸ್ಪಷ್ಟವಾಗಿ ಗೊತ್ತಿರುವ ಹಿನ್ನೆಲೆಯಲ್ಲಿ ಭಾರ್ಗವಿ ತಾನೇ ತೋಡಿದ ಹಳ್ಳಕ್ಕೆ ಬಿದ್ದಳಾ ಎನ್ನುವುದು ಈಗಿರುವ ಪ್ರಶ್ನೆ. 

ನಿಜಕ್ಕೂ ಈ ಹಾಟ್​ ಬ್ಯೂಟಿ ಅದೇ ಜಾಹೀರಾತಿನ ಬಾಲಕಿನಾ? ಊಹಿಸಲು ಸಾಧ್ಯವೇ ಇಲ್ಲ ನೋಡಿ..!

ಅದೇ ಇನ್ನೊಂದೆಡೆ, ಸೀತಾಳ ಬಗ್ಗೆ ಅಭಿಮಾನಿಗಳ ಆಕ್ರೋಶ ದಿನದಿಂದ ದಿನಕ್ಕೆ ಏರುತ್ತಿದೆ. ಸೀತಾ ಹಾಗೂ ಸಿಹಿಯನ್ನು ಒಪ್ಪಿಕೊಂಡಿರುವ ದೇಸಾಯಿ, ಮದುವೆಯಾದ ಮೇಲೆ ತನಗೊಂದು ವಾರಸುದಾರ ಬೇಕು ಎಂದು ಹೇಳಿದ್ದನ್ನೇ ದೊಡ್ಡದು ಮಾಡಿಕೊಂಡು ಸೀತಾ ಮದುವೆಯನ್ನೇ ಒಲ್ಲೆ ಎಂದು ಬಂದಿದ್ದಾಳೆ. ಸಿಹಿಯನ್ನು ಬಿಟ್ಟು ಯಾವ ಮಗುವೂ ಬೇಡ ಎನ್ನುವುದು ಅವಳ ಮಾತು. ಇದೇ ಕಾರಣಕ್ಕೆ ಮನೆಗೆ ಬಂದು ಸಿಕ್ಕಾಪಟ್ಟೆ ಅತ್ತಿದ್ದಾಳೆ. ಆದರೆ ಪಾಪ ಸಿಹಿ, ಸೀತಮ್ಮನನ್ನು ನೋಡಿ ತನ್ನಂದಿ ಸೀತಾ ಮತ್ತು ರಾಮ್‌ ಮದ್ವೆಯಾಗುತ್ತಿಲ್ಲ ಎಂದು ನೊಂದುಕೊಂಡಿದ್ದಾಳೆ. ಸೀದಾ ದೇಸಾಯಿಗೆ ಕಾಲ್‌ ಮಾಡಿ ನನ್ನ ಸೀತಮ್ಮನಿಗೆ ಏನು ಹೇಳಿದ್ರಿ, ಅವಳು ಅಳ್ತಾ ಇದ್ದಾಳೆ ಎಂದು ಜೋರು ಮಾಡಿದ್ದಾಳೆ. ದೇಸಾಯಿ ಹಾಗೂ ರಾಮ್‌ ಎಷ್ಟೇ ಸಮಾಧಾನ ಮಾಡಲು ನೋಡಿದ್ರೂ ಅವಳು ಕೇಳುತ್ತಿಲ್ಲ.

ರಾಮ್​  ಮತ್ತು ಸೀತಾಳ ಪ್ರೇಮವನ್ನು ದೇಸಾಯಿ ಒಪ್ಪಿಕೊಂಡಿದ್ದಾರೆ. ಸಿಹಿಯಿಂದ ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಇಲ್ಲಿರೋದು ಸೀತಾಳ ಸಮಸ್ಯೆ. ದೇಸಾಯಿ ಅವರು ತಮ್ಮ ವಂಶವನ್ನು ಮುಂದುವರೆಸಲು ನಿನ್ನ ಮತ್ತು ರಾಮ್​ನಿಂದ ಒಂದು ಮಗು ಬೇಕು ಎಂದಿದ್ದಾರೆ. ಆದರೆ ಇದು ಸೀತಾಳಿಗೆ ಇಷ್ಟವಿಲ್ಲ. ಸಿಹಿಯನ್ನು ಬಿಟ್ಟು ಬೇರೆ ಮಗು ಅವಳಿಗೆ ಬೇಡ. ಮತ್ತೊಂದು ಮಗು ಹೆರಲು ನಾನು ರೆಡಿ ಇಲ್ಲ. ಸಿಹಿ ಒಬ್ಬಳೇ ನನ್ನಮಗಳು ಎಂದಿದ್ದಾಳೆ. ಇದೇ ಮಾತನ್ನು ರಾಮ್​ಗೂ ಹೇಳಿದ್ದಾಳೆ.

ಡ್ರೆಸ್​ನಿಂದ ಉದುರಿದ ಹೂವು, ಎಲೆಗಳು... ಅಬ್ಬಬ್ಬಾ ಉರ್ಫಿಗೆ ಉರ್ಫಿನೇ ಸಾಟಿ ಕಣ್ಲಾ ಅಂತಿದ್ದಾರೆ ಫ್ಯಾನ್ಸ್​..


Follow Us:
Download App:
  • android
  • ios